ಯುವಜನರಿಗೆ ಶಿಕ್ಷಣವು ಮುಖ್ಯವಾಗಿದೆ ಏಕೆಂದರೆ ಶಿಕ್ಷಣವು ಜೀವನದ ತಿಳುವಳಿಕೆ ಮತ್ತು ತತ್ವಗಳನ್ನು ಅಭಿವೃದ್ಧಿಪಡಿಸಲು, ವೃತ್ತಿ ಆಯ್ಕೆ ಮಾಡಲು ಹಾಗೂ ಗುರಿಯ ಅನ್ವೇಷಣೆಗೆ ಸಹಕಾರಿಯಾಗಿದೆ. ಶಿಕ್ಷಣದ ಮುಖ್ಯ ಗುರಿ ಯುವಕರಿಗೆ ಅಗತ್ಯವಾದ ಕೌಶಲ್ಯ ಪಡೆಯಲು ಸಹಾಯ ಮಾಡುವುದು ಮತ್ತು ಅವರು ಆಯ್ಕೆ ಮಾಡಿದ ಹಾಗೂ ಅವರ ಆಸಕ್ತಿಹೊಂದಿರುವ  ಕ್ಷೇತ್ರಗಳಲ್ಲಿ ಅಗತ್ಯ ಪರಿಣತಿಯನ್ನು ಅಭಿವೃದ್ಧಿಪಡಿಸುವುದು. ಶಿಕ್ಷಣವು ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯ, ಉತ್ತಮ ಆಡಳಿತದ ಹಾಗೂ ಪ್ರಗತಿಯ ಪ್ರತಿನಿಧಿಯನ್ನಾಗಿಸುತ್ತವೆ. 
ವ್ಯಕ್ತಿಯ ಜೀವನದ ಯಶಸ್ಸು ಆತ ಪಡೆದ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಂಪತ್ತು, ಸಮೃದ್ಧಿ ಮತ್ತು ಸ್ಥಿರತೆ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ಯುವ ಸ್ಪಂದನ ಕಾರ್ಯಕ್ರಮವು ಯುವಕರು ಎದುರಿಸುವ ಶಿಕ್ಷಣ ಮತ್ತು ವೃತ್ತಿ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ.
ವ್ಯಕ್ತಿಯ ಜೀವನ ಮೇಲೆ ಪ್ರಮುಖ ಪರಿಣಾಮ ಬೀರುವ ಕ್ಷೇತ್ರ ಶಿಕ್ಷಣವಾಗಿದ್ದು, ಇಂದಿನ ಯುವಜನರಿಗೆ ಪ್ರಮುಖ ಸವಾಲಾಗಿದೆ. ಯುವ ಸ್ಪಂದನವು ಶಿಕ್ಷಣದ ಮೇಲೆ ಪರಿಣಾಮ ಬೀರಬಲ್ಲ ಅಂಶಗಳಾದ ಆರ್ಥಿಕ ತೊಂದರೆಗಳು, ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಅಪನಂಬಿಕೆಗಳು, ಉತ್ತೇಜನದ ಕೊರತೆ, ಕಳಪೆ ಬೋಧನಾ ಪದ್ಧತಿಗಳು, ಕಲಿಕಾ ಸಮಸ್ಯೆಗಳು ಇತ್ಯಾದಿ ಹಲವು ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ, ಅಲ್ಲದೇ ಈ ಕಾರ್ಯಕ್ರಮವು ಯುವ ಪರಿವರ್ತಕರು ಅವರ ಕುಟುಂಬಗಳಿಗೆ ಅಥವಾ ಅಧ್ಯಾಪಕರಿಗೆ ಯುವ ಜನಾಂಗ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಣ ಮತ್ತು ಶೈಕ್ಷಣಿಕ ಸಮಸ್ಯೆಗಳಿಗೆ ಬೆಂಬಲ ನೀಡುತ್ತದೆ.
ಯುವ ಸ್ಪಂದನವು ಮಾರ್ಗದರ್ಶನ ನೀಡುವ ಶಿಕ್ಷಣ ಮತ್ತು ವೃತ್ತಿ ವಿಷಯಗಳು
  • ಗುರಿ ನಿರ್ಧರಿಸುವಿಕೆ 
  • ಏಕಾಗ್ರತೆ
  • ನೆನಪಿನ ಶಕ್ತಿ
  • ಸಮಯ ನಿರ್ವಹಣೆ
  • ಪರೀಕ್ಷೆಯ ನಿರ್ವಹಣೆ
  • ಶಿಕ್ಷಣದ ಒತ್ತಡವನ್ನು ನಿಭಾಯಿಸುವಿಕೆ
  • ವೈಫಲ್ಯ ನಿಭಾಯಿಸುವಿಕೆ 

ಯುವ ಸ್ಪಂದನವು. . . . . .

  •  ಉತ್ತಮ ಜೀವನ ನಡೆಸಲು ಶಿಕ್ಷಣದ ಅಡಿಪಾಯವು ಪ್ರಮುಖವಾಗಿದೆ, ಶಿಕ್ಷಣದ ವೈಯುಕ್ತಿಕ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಮುನ್ನಡೆಸಲು ಸಹಾಯ ಮಾಡುತ್ತದೆ.
  • ವೃತ್ತಿಯ ಅನ್ವೇಷಣೆ ಮತ್ತು ಶಿಕ್ಷಣದ ಸಾಮಾನ್ಯ ಸವಾಲುಗಳನ್ನು ಗುರುತಿಸಿ ಅದನ್ನು ಪರಿಹರಿಸಲು ಯುವಜನರಿಗೆ ಸಹಾಯ ಮಾಡುತ್ತದೆ.
  •  ಆರಂಭಿಕ ಮಟ್ಟದಲ್ಲಿ ಯುವಕರಿಗೆ ಸರಿಯಾದ ನಿರ್ದೇಶನ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ.
  •  ಅಧ್ಯಯನ ಕೌಶಲ್ಯವನ್ನು ಸುಧಾರಿಸಲು ಮತ್ತು ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಕಲಿಯಲು, ಕಾರ್ಯಕ್ಷಮತೆಯ ಆತಂಕವನ್ನು ನಿರ್ವಹಿಸಲು ಮತ್ತು ಒತ್ತಡವನ್ನು ನಿಭಾಯಿಸಲು ಸಹಕರಿಸುತ್ತದೆ
  • ವಿವಿಧ ಸನ್ನಿವೇಶಗಳಲ್ಲಿ ಕೈಬಿಟ್ಟಿರುವ ಪ್ರಯತ್ನಗಳನ್ನು ಅನ್ವೇಷಿಸಿ, ವೃತ್ತಿಪರ ತರಬೇತಿಗಳಂತಹ ಇತರ ಆಯ್ಕೆಗಳ ಭರವಸೆಯನ್ನು ಮೂಡಿಸಿ,
    ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ, ಸೂಕ್ತ ಸಂದರ್ಭದಲ್ಲಿ, ಸೂಕ್ತ ವ್ಯಕ್ತಿಗಳಿಂದ ಮಾರ್ಗದರ್ಶನ ದೊರೆಯುವಂತೆ ಮಾಡುತ್ತದೆ.

ನೀವು ಮಾರ್ಗದರ್ಶನ ಪಡೆಯಲು ಬಯಸುವಿರಾ? ತಡವಾಗುವ ಮುನ್ನ ತಕ್ಷಣ ನಮ್ಮನ್ನು ಸಂಪರ್ಕಿಸಿ. ನಮಗೆ ಬರೆಯಲು ಇಲ್ಲಿ ಕ್ಲಿಕ್ ಮಾಡಿ